Aravalli Mountain Range Controversy: Why This Ancient Mountain Range Is So Important-2025
Aravalli Mountain Range Controversy: Why This Ancient Mountain Range Is So Important-2025: ದೆಹಲಿ-ಎನ್ಸಿಆರ್ & ಉತ್ತರ ಭಾರತದ ‘ಹಸಿರು ಶ್ವಾಸಕೋಶಗಳು’ ಎಂದು ಕರೆಯಲ್ಪಡುವ ಅರಾವಳಿ ಪರ್ವತ ಶ್ರೇಣಿಯ ಕುರಿತಾಗಿ ಮತ್ತೆ ಹೊಸ ವಿವಾದ ಭುಗಿಲೆದ್ದಿದೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ಅರಾವಳಿ ಬೆಟ್ಟಗಳ ಕುರಿತು ಹೊಸ ವ್ಯಾಖ್ಯಾನವನ್ನು ಅನುಮೋದಿಸಿರುವುದು ಪರಿಸರ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಮರುವರ್ಗೀಕರಣದಿಂದ ದಶಕಗಳಿಂದ ಜಾರಿಯಲ್ಲಿದ್ದ ಕಾನೂನು ರಕ್ಷಣೆಗಳು ದುರ್ಬಲಗೊಳ್ಳುವ ಭೀತಿ ವ್ಯಕ್ತವಾಗಿದೆ.
ಹಳೆಯ ಪರ್ವತ ಶ್ರೇಣಿ ಯಾಕೆ ಮುಖ್ಯ?
ವಿಶ್ವದ ಅತ್ಯಂತ ಹಳೆಯ ಪರ್ವತ ಶ್ರೇಣಿಯಾದ ಅರಾವಳಿ, ಥಾರ್ ಮರುಭೂಮಿಯ ಬಿಸಿಯನ್ನು ತಡೆಯುವ ಪ್ರಕೃತಿ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಅಂತರ್ಜಲ ಸಂರಕ್ಷಣೆ, ಹವಾಮಾನ ಸಮತೋಲನ & ಜೀವವೈವಿಧ್ಯ ರಕ್ಷಣೆಯಲ್ಲಿ ಇದರ ಪಾತ್ರ ಅಮೂಲ್ಯ. ಆದರೆ ಅಕ್ರಮ ಗಣಿಗಾರಿಕೆ, ನಗರ ವಿಸ್ತರಣೆ & ಅರಣ್ಯನಾಶದಿಂದಾಗಿ ಈ ಶ್ರೇಣಿ ವರ್ಷಗಳಿಂದ ನಿರಂತರವಾಗಿ ಹದಗೆಡುತ್ತಿದೆ.
ಅರಾವಳಿ ಉಳಿಸಿ ಪ್ರತಿಭಟನೆ:
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಅರಾವಳಿ ರಕ್ಷಣೆಯೇ ಏಕರೂಪದ ವ್ಯಾಖ್ಯಾನದ ಉದ್ದೇಶ ಎಂದು ಹೇಳಿದ್ದರು. ಈ ವ್ಯಾಖ್ಯಾನವು ನಾಲ್ಕು ರಾಜ್ಯಗಳಲ್ಲಿ ಭೂ ಬಳಕೆ ಮತ್ತು ಗಣಿಗಾರಿಕೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರ ಅರಾವಳಿಯ ಗರಿಷ್ಠ ಸಂರಕ್ಷಣೆಗೆ ಬದ್ಧವೆಂದು ತಿಳಿಸಿದೆ ಮತ್ತು ಸುಪ್ರೀಂ ಕೋರ್ಟ್ ಸುಸ್ಥಿರ ಗಣಿಗಾರಿಕೆಗಾಗಿ ಯೋಜನೆ ರೂಪಿಸುವಂತೆ ಮಾತ್ರ ಸೂಚಿಸಿದೆ. ಆದರೆ ‘ಅರಾವಳಿ ಉಳಿಸಿ, ಭವಿಷ್ಯವನ್ನು ಉಳಿಸಿ’ ಎಂಬ ಘೋಷಣೆಯೊಂದಿಗೆ ಪರಿಸರ ಹೋರಾಟ ತೀವ್ರಗೊಂಡಿದೆ.
ಅರಾವಳಿ ಇಲ್ಲದಿದ್ದರೆ ಆಗುವ ತೊಂದರೆಗಳು:
ತೀವ್ರ ವಾಯು ಮಾಲಿನ್ಯ:
ಮರುಭೂಮಿಯ ಧೂಳು ದೆಹಲಿ-ಎನ್ಸಿಆರ್ನಲ್ಲಿ ಹೆಚ್ಚಾಗಿ, ಗಾಳಿಯ ಗುಣಮಟ್ಟ ಕುಸಿತ
ನೀರಿನ ಬಿಕ್ಕಟ್ಟು:
ಅಂತರ್ಜಲ ಮರುಪೂರಣ ವಲಯಗಳ ನಾಶದಿಂದ ಭೂಗರ್ಭ ಜಲಮಟ್ಟ ಕುಸಿದು, ಕುಡಿಯುವ ನೀರಿನ ಕೊರತೆ
ಹೆಚ್ಚಿದ ಶಾಖ:
ನೈಸರ್ಗಿಕ ಶಾಖ ತಡೆಗೋಡೆ ಕಳೆದು, ನಗರಗಳು ‘ಅರ್ಬನ್ ಹೀಟ್ ಐಲ್ಯಾಂಡ್’ ಆಗಿ ಶಾಖದ ಅಲೆಗಳಿಗೆ ಒಳಗಾಗುತ್ತವೆ
ಜೀವವೈವಿಧ್ಯ ನಷ್ಟ:
ಅನೇಕ ಸಸ್ಯ & ಪ್ರಾಣಿ ಪ್ರಭೇದಗಳು ವಾಸಸ್ಥಾನ ಇಲ್ಲದೇ ಅಳಿವಿನಂಚಿಗೆ ತಲುಪುತ್ತವೆ.
ಆರೋಗ್ಯ-ಆರ್ಥಿಕ ಹೊರೆ:
ಮಾಲಿನ್ಯ & ನೀರಿನ ಕೊರತೆಯಿಂದ ಉಸಿರಾಟದ ನಾಯಿಲೆಗಳು ಹೆಚ್ಚಾಗಿ, ಭಾರೀ ಒತ್ತಡ ಬೀರುತ್ತದೆ.
ಕೇಂದ್ರ ಸರಕಾರವು ಅರಾವಳಿ ಪರ್ವತ ಶ್ರೇಣಿಗೆ ಹೊಸ ಹಾಗೂ ಏಕೀಕೃತ ವ್ಯಾಖ್ಯಾನವನ್ನು ಅಂಗೀಕರಿಸಿರುವುದು ದೇಶದಾದ್ಯಂತ ತೀವ್ರ ಚರ್ಚೆ, ಆತಂಕ ಹಾಗೂ ವಿರೋಧಕ್ಕೆ ಕಾರಣವಾಗಿದೆ. ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾದ ಅರಾವಳಿಗಳ ಪರಿಸರ ಸಂರಕ್ಷಣೆಗೆ ಈ ಹೊಸ ಮಾನದಂಡವು ಅತಿಹೆಚ್ಚು ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಪರಿಸರ ತಜ್ಞರು ಮತ್ತು ನಾಗರಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇತ್ತ ಸರಕಾರ ಮಾತ್ರ, ಅರಾವಳಿ ಪ್ರದೇಶದ ಬಹುಪಾಲು ಭಾಗ ಇನ್ನೂ ಕಠಿಣ ಕಾನೂನು ರಕ್ಷಣೆಯಲ್ಲೇ ಇದೆ ಎಂದು ಸ್ಪಷ್ಟಪಡಿಸಿದೆ.
ಸುಪ್ರೀಂ ಹೇಳಿದ್ದೇನು?:
ನವೆಂಬರ್ 20ರಂದು ಸುಪ್ರೀಂಕೋರ್ಟ್ ಅನುಮೋದಿಸಿದ ಹೊಸ ಮಾನದಂಡಗಳ ಪ್ರಕಾರ, ಸುತ್ತಲಿನ ಭೂಭಾಗಕ್ಕಿಂತ ಕನಿಷ್ಠ 100 ಮೀಟರ್ ಎತ್ತರ ಹೊಂದಿರುವ ಭೂಆಕಾರಗಳನ್ನು ಮಾತ್ರ ಅರಾವಳಿ ಪರ್ವತಗಳೆಂದು ಪರಿಗಣಿಸಲಾಗುತ್ತದೆ. ಇಂತಹ ಎರಡು ಪರ್ವತಗಳು 500 ಮೀಟರ್ ವ್ಯಾಪ್ತಿಯಲ್ಲಿ ಇದ್ದರೆ ಅವುಗಳನ್ನು ಒಟ್ಟಾಗಿ ಅರಾವಳಿ ಶ್ರೇಣಿಯ ಭಾಗವೆಂದು ಗುರುತಿಸಲಾಗುತ್ತದೆ. ಈ ವ್ಯಾಖ್ಯಾನವು ಭೌಗೋಳಿಕ ದೃಷ್ಟಿಯಿಂದ ಸ್ಪಷ್ಟತೆ ತರುವ ಉದ್ದೇಶ ಹೊಂದಿದ್ದರೂ, ಇದರಿಂದ ಕಡಿಮೆ ಎತ್ತರದ ಅನೇಕ ಗುಡ್ಡಗಳು ಮತ್ತು ಬೆಟ್ಟಗಳು ಅರಾವಳಿ ವ್ಯಾಪ್ತಿಯಿಂದ ಹೊರಗುಳಿಯಲಿವೆ.
ಪರಿಸರ ತಜ್ಞರ ಅಭಿಪ್ರಾಯ:
ಪರಿಸರ ತಜ್ಞರ ಪ್ರಕಾರ, ಎತ್ತರ ಕಡಿಮೆಯಿದ್ದರೂ ಈ ಪ್ರದೇಶಗಳು ಭೂಗರ್ಭ ಜಲ ಸಂಗ್ರಹ,ಜೀವ ವೈವಿಧ್ಯ ಸಂರಕ್ಷಣೆ, ಧೂಳು ಹಾಗೂ ಬಿಸಿಲು ತಡೆಯುವ ನೈಸರ್ಗಿಕ ಅಡ್ಡಗೋಡೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಹೊಸ ವ್ಯಾಖ್ಯಾನದ ಪರಿಣಾಮವಾಗಿ ಈ ಪ್ರದೇಶಗಳಿಗೆ ಕಾನೂನು ರಕ್ಷಣೆಯ ಕೊರತೆ ಉಂಟಾದರೆ, ಭವಿಷ್ಯದಲ್ಲಿ ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ದಾರಿ ತೆರೆದುಕೊಳ್ಳಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.
ವಿಶೇಷವಾಗಿ ದಿಲ್ಲಿ ಎನ್ಸಿಆರ್, ಹರಿಯಾಣ ಮತ್ತು ರಾಜಸ್ಥಾನದ ಭಾಗಗಳಲ್ಲಿ ಇದು ಗಂಭೀರ ಸಮಸ್ಯೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಆತಂಕ ತಳ್ಳಿ ಹಾಕಿದ ಸಚಿವಾಲಯ:
ಕೇಂದ್ರ ಪರಿಸರ ಸಚಿವಾಲಯವು ಈ ಆತಂಕಗಳನ್ನು ತಳ್ಳಿ ಹಾಕಿದ್ದು, ಒಟ್ಟು ಅರಾವಳಿ ಪ್ರದೇಶದ ಶೇ. 0.19 ಭಾಗದಲ್ಲಿ ಮಾತ್ರ ಗಣಿಗಾರಿಕೆ ಸಾಧ್ಯ ಎಂದು ಸ್ಪಷ್ಟಪಡಿಸಿದೆ. ಅದು ಕೂಡಾ ಸಮಗ್ರ ವೈಜ್ಞಾನಿಕ ಅಧ್ಯಯನ ಮತ್ತು ಸ್ಥಿರ ಗಣಿಗಾರಿಕಾ ನಿರ್ವಹಣಾ ಯೋಜನೆಯ ನಂತರವೇ ನಡೆಯಲಿದೆ ಎಂದು ಹೇಳಿದೆ. ಹೊಸ ಗಣಿಗಾರಿಕಾ ಪರವಾನಗಿಗಳನ್ನು ತಕ್ಷಣ ನೀಡಲಾಗುವುದಿಲ್ಲ ಎಂಬ ಭರವಸೆಯನ್ನೂ ಸರಕಾರ ನೀಡಿದೆ. ಇದಲ್ಲದೆ, ಅರಣ್ಯ ಕಾಯಿದೆ, ವನ್ಯಜೀವಿ ಸಂರಕ್ಷಣಾ ಕಾಯಿದೆ, ಪರಿಸರ ಸಂವೇದಿ ವಲಯಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳ ಅಡಿಯಲ್ಲಿ ಬರುವ ಅರಾವಳಿ ಭಾಗಗಳಿಗೆ ಯಾವುದೇ ರೀತಿಯ ಸಡಿಲಿಕೆ ಇಲ್ಲ ಎಂದು ಸರಕಾರ ತಿಳಿಸಿದೆ.
ಅರಾವಳಿ ಸಂರಕ್ಷಿಸಿ ಅಭಿಯಾನ:
ಪರಿಸರ ಕಾರ್ಯಕರ್ತರು,ಕೇಂದ್ರ ಸರಕಾರ ಹೇಳುತ್ತಿರುವ ರಕ್ಷಣೆಗಳು ಎಲ್ಲಾ ಪ್ರದೇಶಗಳಿಗೆ ಸಮಾನವಾಗಿ ಅನ್ವಯವಾಗುವುದಿಲ್ಲ ಎಂದು ವಾದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ, ಹರಿಯಾಣ ಮತ್ತು ಇತರೆ ರಾಜ್ಯಗಳಲ್ಲಿ ‘ಅರಾವಳಿ ಸಂರಕ್ಷಿಸಿ’ ಅಭಿಯಾನಗಳು ಆರಂಭವಾಗಿದ್ದು, ಸಾರ್ವಜನಿಕ ಪ್ರತಿಭಟನೆಗಳು ಮತ್ತು ಕಾನೂನು ಸವಾಲುಗಳು ಮುಂದುವರಿದಿವೆ. ಕೆಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ಸ್ವೀಕರಿಸಿದ್ದು, ಹೊಸ ವ್ಯಾಖ್ಯಾನದಿಂದ ಉಂಟಾಗಬಹುದಾದ ಪರಿಸರ ಹಾನಿಯ ಬಗ್ಗೆ ಚರ್ಚಿಸುತ್ತಿದೆ. ಒಟ್ಟಾರೆ, ಅರಾವಳಿ ಪರ್ವತಗಳ ಹೊಸ ವ್ಯಾಖ್ಯಾನವು ಕೇವಲ ಗಣಿಗಾರಿಕೆಗೆ ಮಾತ್ರ ಸೀಮಿತವಾಗದೆ, ಪರಿಸರ ಸಮತೋಲನ, ನಗರೀಕರಣ ಮತ್ತು ಭವಿಷ್ಯದ ಅಭಿವೃದ್ಧಿ ನೀತಿಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವುದು ಈ ಚರ್ಚೆಯ ಕೇಂದ್ರಬಿಂದುವಾಗಿದೆ.

ಅರಾವಳಿ ಬೆಟ್ಟಗಳು (Aravalli Hills)
ಅರಾವಳಿ ಬೆಟ್ಟಗಳು ವಿಶ್ವದ ಅತ್ಯಂತ ಪ್ರಾಚೀನ ಪರ್ವತ ಶ್ರೇಣಿಗಳಲ್ಲಿ ಒಂದಾಗಿವೆ. ಇವು ಭಾರತದಲ್ಲಿ ಪರಿಸರ, ಹವಾಮಾನ ಮತ್ತು ಜಲ ಸಂಪನ್ಮೂಲಗಳ ದೃಷ್ಟಿಯಿಂದ ಅತ್ಯಂತ ಮಹತ್ವ ಹೊಂದಿವೆ.
ಮುಖ್ಯ ಮಾಹಿತಿ:
ಸ್ಥಳ: ಗುಜರಾತ್ನಿಂದ ಆರಂಭವಾಗಿ ರಾಜಸ್ಥಾನ, ಹರಿಯಾಣ ಮತ್ತು ದೆಹಲಿ ಮೂಲಕ ವಿಸ್ತರಿಸಿವೆ
ಉದ್ದ: ಸುಮಾರು 800 ಕಿಮೀ
ವಯಸ್ಸು: ಸುಮಾರು 3.2 ಬಿಲಿಯನ್ ವರ್ಷಗಳು (ಭೂಮಿಯ ಅತ್ಯಂತ ಹಳೆಯ ಪರ್ವತಗಳಲ್ಲಿ ಒಂದು)
ಅತಿ ಎತ್ತರದ ಶಿಖರ: ಗುರು ಶಿಖರ್ (1,722 ಮೀ) – ರಾಜಸ್ಥಾನ
ಮಹತ್ವ:
ಪರಿಸರ ಸಂರಕ್ಷಣೆ: ಮರುಭೂಮಿ ವಿಸ್ತಾರವನ್ನು ತಡೆದು ನಿಲ್ಲಿಸುತ್ತದೆ
ಜಲ ಸಂಪನ್ಮೂಲ: ಅನೇಕ ನದಿಗಳು ಮತ್ತು ಭೂಗರ್ಭ ಜಲದ ಮೂಲ
ಮಳೆಯ ಮೇಲೆ ಪ್ರಭಾವ: ದಕ್ಷಿಣ-ಪಶ್ಚಿಮ ಮಳೆಯ ಹರಿವನ್ನು ನಿಯಂತ್ರಿಸುತ್ತದೆ
ಜೈವ ವೈವಿಧ್ಯ: ಹಲವಾರು ಸಸ್ಯ-ಪ್ರಾಣಿ ಜಾತಿಗಳಿಗೆ ಆಶ್ರಯ
ಇತ್ತೀಚಿನ ವಿವಾದ:
ಗಣಿಗಾರಿಕೆ, ಅಕ್ರಮ ನಿರ್ಮಾಣ ಮತ್ತು ಅರಣ್ಯ ನಾಶದಿಂದ ಅರಾವಳಿ ಪ್ರದೇಶ ಅಪಾಯದಲ್ಲಿದೆ
ಪರಿಸರವಾದಿಗಳು ಮತ್ತು ನ್ಯಾಯಾಲಯಗಳು ಸಂರಕ್ಷಣೆಗೆ ಒತ್ತಾಯಿಸುತ್ತಿವೆ.
ಅರಾವಳಿ ಶ್ರೇಣಿ ಸಂಘರ್ಷ – FAQ
1) ಅರಾವಳಿ ಶ್ರೇಣಿ ಸಂಘರ್ಷ ಎಂದರೇನು?
ಅರಾವಳಿ ಪರ್ವತ ಶ್ರೇಣಿಯ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಅರಣ್ಯ ನಾಶ, ನಗರೀಕರಣ ಮತ್ತು ಕೈಗಾರಿಕಾ ವಿಸ್ತರಣೆಗಳಿಗೆ ಸಂಬಂಧಿಸಿದ ವಿವಾದವನ್ನೇ ಅರಾವಳಿ ಶ್ರೇಣಿ ಸಂಘರ್ಷ ಎಂದು ಕರೆಯಲಾಗುತ್ತದೆ.
2) ಅರಾವಳಿ ಶ್ರೇಣಿ ಏಕೆ ಅತ್ಯಂತ ಮಹತ್ವದ್ದಾಗಿದೆ?
ಅರಾವಳಿ ಶ್ರೇಣಿ:
- ಮರುಭೂಮಿಯ ವಿಸ್ತರಣೆಯನ್ನು ತಡೆಯುತ್ತದೆ
- ಭೂಗರ್ಭ ಜಲಮಟ್ಟ ಉಳಿಸಿಕೊಳ್ಳಲು ಸಹಾಯಕ
- ಹವಾಮಾನ ಸಮತೋಲನ ಕಾಪಾಡುತ್ತದೆ
- ಜೈವ ವೈವಿಧ್ಯ ಸಂರಕ್ಷಣೆಗೆ ಅಗತ್ಯ
3) ಅರಾವಳಿ ಶ್ರೇಣಿ ಯಾವ ರಾಜ್ಯಗಳಲ್ಲಿ ವಿಸ್ತರಿಸಿದೆ?
- ಅರಾವಳಿ ಶ್ರೇಣಿ ಮುಖ್ಯವಾಗಿ:
- ಗುಜರಾತ್
- ರಾಜಸ್ಥಾನ
- ಹರಿಯಾಣ
- ದೆಹಲಿ (ಕೆಲವು ಭಾಗಗಳು)
ರಾಜ್ಯಗಳಲ್ಲಿ ವಿಸ್ತರಿಸಿದೆ.
4) ಅರಾವಳಿ ಶ್ರೇಣಿಯ ಕುರಿತ ಮುಖ್ಯ ವಿವಾದವೇನು?
ಪ್ರಮುಖ ವಿವಾದಗಳು:
- ಪರ್ವತ ಪ್ರದೇಶಗಳನ್ನು “ಅರಣ್ಯವಲ್ಲ” ಎಂದು ಘೋಷಿಸುವ ಪ್ರಯತ್ನ
- ಅಕ್ರಮ ಗಣಿಗಾರಿಕೆ
- ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ಚಟುವಟಿಕೆಗಳು
- ಪರಿಸರ ಕಾಯ್ದೆಗಳ ಉಲ್ಲಂಘನೆ
5) ಅಕ್ರಮ ಗಣಿಗಾರಿಕೆ ಅರಾವಳಿಗೆ ಹೇಗೆ ಹಾನಿ ಮಾಡುತ್ತಿದೆ?
ಅಕ್ರಮ ಗಣಿಗಾರಿಕೆಯಿಂದ:
- ಭೂಸ್ಫೋಟ ಮತ್ತು ಭೂ ಕುಸಿತ
- ಜಲಮೂಲಗಳ ನಾಶ
- ಅರಣ್ಯ ನಾಶ
- ವನ್ಯಜೀವಿಗಳ ವಾಸಸ್ಥಾನ ಹಾನಿ
ನಡೆಯುತ್ತಿದೆ.
6) ಅರಾವಳಿ ನಾಶವಾದರೆ ಏನು ಪರಿಣಾಮಗಳು ಉಂಟಾಗುತ್ತವೆ?
ಅರಾವಳಿ ನಾಶವಾದರೆ:
- ರಾಜಸ್ಥಾನ ಮರುಭೂಮಿ ದೆಹಲಿ–ಎನ್ಸಿಆರ್ ಕಡೆಗೆ ವಿಸ್ತರಿಸಬಹುದು
- ಜಲ ಸಂಕಷ್ಟ ಹೆಚ್ಚಾಗುತ್ತದೆ
- ತಾಪಮಾನ ಏರಿಕೆ
- ವಾಯು ಮಾಲಿನ್ಯ ಹೆಚ್ಚಳ
7) ಅರಾವಳಿ ಶ್ರೇಣಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪುಗಳಿವೆಯೇ?
ಹೌದು. ಸುಪ್ರೀಂ ಕೋರ್ಟ್ ಮತ್ತು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ (NGT) ಅರಾವಳಿ ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತು ನಿರ್ಮಾಣ ಕಾರ್ಯಗಳಿಗೆ ನಿರ್ಬಂಧ ವಿಧಿಸಿರುವ ಹಲವು ತೀರ್ಪುಗಳನ್ನು ನೀಡಿದ್ದಾರೆ.
8) ಸರ್ಕಾರ ಅರಾವಳಿ ರಕ್ಷಣೆಗೆ ಏನು ಕ್ರಮಗಳನ್ನು ಕೈಗೊಳ್ಳುತ್ತಿದೆ?
ಸರ್ಕಾರದ ಕ್ರಮಗಳು:
- ಗಣಿಗಾರಿಕೆ ನಿಯಂತ್ರಣ
- ಅರಣ್ಯ ಸಂರಕ್ಷಣಾ ಕಾಯ್ದೆಗಳ ಅನುಷ್ಠಾನ
- ಪರಿಸರ ಪರಿಣಾಮ ಮೌಲ್ಯಮಾಪನ (EIA)
- ಹಸಿರೀಕರಣ ಯೋಜನೆಗಳು
9) ಸಾರ್ವಜನಿಕರು ಅರಾವಳಿ ರಕ್ಷಣೆಗೆ ಏನು ಮಾಡಬಹುದು?
ಸಾರ್ವಜನಿಕರು:
- ಪರಿಸರ ಜಾಗೃತಿ ಮೂಡಿಸುವುದು
- ಅಕ್ರಮ ಚಟುವಟಿಕೆಗಳ ವಿರುದ್ಧ ದೂರು ನೀಡುವುದು
- ಪರಿಸರ ಹೋರಾಟಗಳಲ್ಲಿ ಭಾಗವಹಿಸುವುದು
- ಹಸಿರು ಅಭಿಯಾನಗಳನ್ನು ಬೆಂಬಲಿಸುವುದು
10) ಅರಾವಳಿ ಸಂಘರ್ಷ ಭಾರತದ ಭವಿಷ್ಯಕ್ಕೆ ಏಕೆ ಪ್ರಮುಖ?
- ಅರಾವಳಿ ಶ್ರೇಣಿ ಉಳಿದರೆ ಮಾತ್ರ:
- ಪರಿಸರ ಭದ್ರತೆ
- ನೀರಿನ ಸ್ಥಿರತೆ
- ಹವಾಮಾನ ನಿಯಂತ್ರಣ
- ಮುಂದಿನ ತಲೆಮಾರಿನ ಸುರಕ್ಷತೆ
ಸಾಧ್ಯವಾಗುತ್ತದೆ.


