History Notes-01: ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

History Notes-01: ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

 

History notes-01 : ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

(ಮೂರು ಅಂಕದ ಪ್ರಶ್ನೆಗಳು)

ಪ್ರಶ್ನೆ 1. 1857 ರ ದಂಗಗೆ ಕಾರಣವಾದ ರಾಜಕೀಯ ಅಂಶಗಳಾವುವು ? ಅಥವಾ 1857 ರ ದಂಗಗೆ ರಾಜಕೀಯ ಕಾರಣಗಳಾವುವು ?

▪️ಲಾರ್ಡ ಡಾಲ್ ಹೌಸಿಯು ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ವಯ ಹಲವು ರಾಜ್ಯಗಳನ್ನು ವಶಪಡಿಸಿಕೊಂಡಿದ್ದು

▪️ಡಾಲ್ ಹೌಸಿಯು ತಂಜಾವೂರು & ಕರ್ನಾಟಕ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದು ಪಡಿಸಿದ್ದು

▪️ಮೊಘಲ್ ಚಕ್ರವರ್ತಿ, ಔದ್ನ ನವಾಬ ಮೊದಲಾದ ರಾಜರುಗಳನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ್ದು,

▪️ಮೊಘಲ್ & ಔದ್‌ನ ಸೈನ್ಯದಲ್ಲಿ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾಗಿದ್ದು

ಪ್ರಶ್ನೆ 2. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ ಪರಿಣಾಮಗಳು ಯಾವುವು ವಿಶ್ಲೇಷಿಸಿ.

▪️ಈ ನೀತಿಯನ್ನು ಇಂಗ್ಲೀಷರ ಕಾಲದಲ್ಲಿ ಲಾರ್ಡ ಡಾಲ್ ಹೌಸಿಯು ಜಾರಿಗೆ ತಂದಿದ್ದನು.

▪️ಯಾವುದೇ ದೇಶೀಯ ಸಂಸ್ಥಾನದ ರಾಜನು ತನಗೆ ಮಕ್ಕಳಿಲ್ಲದಿದ್ದರೆ ರಾಜ್ಯವನ್ನು ದತ್ತು ಮಕ್ಕಳಿಗೆ ನೀಡುವಂತಿರಲಿಲ್ಲ. ಇದರಿಂದಾಗಿ ಆ ಸಂಸ್ಥಾನವು ಸಹಜವಾಗಿ ಬ್ರಿಟಿಷರ ವಶವಾಗುತ್ತಿದ್ದವು.

▪️ಈ ನೀತಿಯಿಂದಾಗಿ ಸತಾರ, ಜೈಪುರ, ಝಾನ್ಸಿ, ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು.

▪️ಮೊಘಲ್ ಚಕ್ರವರ್ತಿ ಔದನ ನವಾಬ ಮೊದಲಾದ ರಾಜರುಗಳಿಗೆ ಮಕ್ಕಳಿಲ್ಲದ ಕಾರಣ ಇಂಗ್ಲೀಷರು ಇವರನ್ನು ಅಧಿಕಾರದಿಂದ ಪದಚ್ಯುತ್ ಗೋಳಿಸಿದರು.

▪️ಪರಿಣಾಮವಾಗಿ ಇವರನ್ನು ಅವಲಂಬಿಸಿದ್ದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು.

▪️ಇದು ಬ್ರಿಟಿಷರ ವಿರುದ್ಧದ 1857 ರ ಪ್ರತಿಭಟನೆಗೆ ರಾಜಕೀಯ ಕಾರಣವಾಗಿ ಪ್ರೇರಕವಾಯಿತು.

ಪ್ರಶ್ನೆ 3. 1857 ರ ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು? ಅಥವಾ 1857 ರ ದಂಗೆಯ ಆರ್ಥಿಕ ಕಾರಣಗಳಾವುವು ?

▪️ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಕರಕುಶಲತೆ & ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು.

▪️ಇಂಗ್ಲೆಂಡ್ ವ್ಯಾಪಾರಿ ರಾಷ್ಟ್ರವಾಗಿರದೆ ಕೈಗಾರಿಕೆಗಳ ಕಾರ್ಯಾಗಾರವಾಯಿತು.

▪️ಭಾರತದಲ್ಲಿದ್ದಂತಹ ಕರಕುಶಲಕಾರರು ನಿರುದ್ಯೋಗಿಗಳಾದರು.

▪️ಬಟ್ಟೆ & ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿ ನೇಕಾರಿಕೆ ವೃತ್ತಿಯವರು ಉದ್ಯೋಗ ಕಳೆದುಕೊಂಡರು.

▪️ಗೃಹ ಕೈಗಾರಿಕೆಗಳು ಇದೇ ಬಗೆಯ ತೀವ್ರ ಆರ್ಥಿಕ ನಷ್ಟ ಅನುಭವಿಸಿ ಶಿಥಿಲಗೊಂಡವು.

▪️ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲೀಷರು ದುಬಾರಿ ಸುಂಕವನ್ನು ಹೇರಿದರು.

▪️ಜಮೀನ್ದಾರರು ಕೃಷಿಕರನ್ನು ಶೋಷಿಸುತ್ತಿದ್ದರು.

▪️ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ಸು ಪಡೆಯಲಾಯಿತು. ಇದರಿಂದಾಗಿ ಕೃಷಿಕರು ತೀವ್ರವಾಗಿ ಅವಮಾನ & ಆರ್ಥಿಕ ಸಂಕಷ್ಟ ಎದುರಿಸಿದರು.

ಪ್ರಶ್ನೆ 4. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆಡಳಿತಾತ್ಮಕ ಕಾರಣಗಳು ಹೇಗೆ ನಾಂದಿಯಾಯಿತು.?

▪️ಇಂಗ್ಲಿಷರು ಹೊಸ ನಾಗರಿಕ & ಅಪರಾಧ ಕಾಯ್ದೆಗಳನ್ನು ಜಾರಿಗೆ ತಂದರು

▪️ಕಾನೂನಿನಲ್ಲಿ ಪಕ್ಷಪಾತ & ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು.

▪️ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಯಿತು.

▪️ಇಂಗ್ಲೀಷ್ ನ್ಯಾಯಾಧಿಶರು ಬಹುತೇಕವಾಗಿ ಇಂಗ್ಲೀಷರ ಪರವಾಗಿ ನ್ಯಾಯ ನೀಡುತ್ತಿದ್ದರು.

▪️ಹೊಸ ಕಾನೂನಿನ ಆಶಯಗಳು ಜನರಿಗೆ ಅರಿವಾಗಲಿಲ್ಲ.

Also read: Deepika Higher Education Scholarship 2026: Eligibility, Application Process & Benefits

ಪ್ರಶ್ನೆ 5. 1857 ರ ದಂಗೆಗೆ ಸೈನಿಕ ಕಾರಣಗಳಾವುವು ?

▪️ಬ್ರಿಟಿಷರ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿ ಗಂಭಿರವಾಗಿತ್ತು.

▪️ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ ವೇತನ, ಬಡ್ತಿ ಅವಕಾಶಗಳು ಭಾರತೀಯ ಸಿಪಾಯಿಗಳಿಗೆ ಇರಲಿಲ್ಲ

▪️ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸುತ್ತಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.

▪️ಭಾರತೀಯ ಸೈನಿಕರಿಗೆ ಕೆಳಹುದ್ದೆ ನೀಡಿದರು.

ಪ್ರಶ್ನೆ 6. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತತ್‌ ಕ್ಷಣದ ಕಾರಣಗಳಾವುವು?

▪️ಇಂಗ್ಲೀಷ್ ಸೇನೆಯಲ್ಲಿದ್ದ ಹೆಚ್ಚಿನ ಪ್ರಮಾಣದ ಭಾರತೀಯ ಸಿಪಾಯಿಗಳು ತಾವೆಲ್ಲರೂ ಒಂದಾಗಿ ಹೋರಾಡಿದರೆ ಇಂಗ್ಲೀಷರನ್ನು ಭಾರತದಿಂದ ಓಡಿಸಬಹುದು ಎಂಬ ಆತ್ಮ ವಿಶ್ವಾಸಹೊಂದಿದ್ದರು.

▪️ಈ ಸನ್ನಿವೇಶದಲ್ಲಿ ಸೈನಿಕರಿಗೆ ರಾಯಲ್ ಎನ್ ಫೀಲ್ಡ್ ಎಂಬ ನವೀನ ಬಂದೂಕಗಳನ್ನು ನೀಡುತ್ತಿದ್ದರು. ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ & ಹಸುವಿನ ಕಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು.

▪️ಹಿಂದೂಗಳಿಗೆ ಹಸು ಪವಿತ್ರವಾದರೆ, ಮುಸ್ಲಿಮರಿಗೆ ಹಂದಿ ನಿಷೇದವಾಗಿತ್ತು.

▪️ಬ್ಯಾರಕ್ ಪುರದಲ್ಲಿ ಸೈನಿಕರಿಗೆ ತುಪಾಕಿಯನ್ನು ಹಲ್ಲಿನಿಂದ ಕಚ್ಚಿ ತೆಗೆಯುವಂತೆ ಇಂಗ್ಲೀಷರು ಆದೇಶಿಸಿದಾಗ ಇದನ್ನು ಸೈನಿಕರು ತಿರಸ್ಕರಿಸಿ ಬಂಡಾಯವೆದ್ದರು.

▪️ಇದೇ ಸಂದರ್ಭದಲ್ಲಿ ಮಂಗಲಪಾಂಡೆ ಎಂಬ ಸೈನಿಕನು ಬ್ರಿಟಿಷರ ಸೈನ್ಯದನ್ನಿಕಾರಿಯೊಬ್ಬನನ್ನು ಕೊಂದನು

▪️ಇದರ ಪರಿಣಾಮವಾಗಿ ಮಂಗಲಪಾಮಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು.

▪️ಇದರಿಂದ ಭಾರತದ ಎಲ್ಲ ಸೈನಿಕರು ಬ್ರಿಟಿಷರ ಮೇಲೆ ಯುದ್ಧ ಸಾರಿದರು.

ಪ್ರಶ್ನೆ 7. 1857ರ ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡಿ

▪️ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ

▪️ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ಅವರ ಸ್ವಹಿತಾಸಕ್ತಿ ಹಾಗೂ ಹಕ್ಕುಗಳಿಗಾಗಿ ನಡೆದಿತ್ತು.

▪️ಇದು ಯೋಜಿತ ದಂಗೆಯಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು.

▪️ಬ್ರಿಟಿಷ್ ಸೈನಿಕರಲ್ಲಿದ್ದ ಒಗ್ಗಟ್ಟಿದ್ದರೆ ಭಾರತೀಯ ಸೈನಿಕರಲ್ಲಿ ಭಿನ್ನತೆ ಇತ್ತು.

▪️ದಂಗೆಗೆ ಸೂಕ್ತ ಮಾರ್ಗದರ್ಶನ & ವ್ಯವಸ್ಥಿತ ಸಂಘಟನೆಯ ಕೊರತೆ ಇತ್ತು.

▪️ಯುದ್ಧ ತಂತ್ರ, ಸೈನಿಕ ಪರಿಣಿತಿ, ಸೂಕ್ತ ಸೇನಾ ನಾಯಕತ್ವ & ಶಿಸ್ತಿನ ಕೊರತೆ ಇತ್ತು.

▪️ಹೋರಾಟಗಾರರಲ್ಲಿ ನಿಶ್ಚಿತ ಗುರಿ ಇರಲಿಲ್ಲ.

▪️ಹಲವಾರು ದೇಶೀಯ ಸಂಸ್ಥಾನಗಳ ರಾಜರುಗಳು ಬ್ರಿಟಿಷರಿಗೆ ತೋರಿದ ನಿಷ್ಠೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ.

▪️ಸಿಪಾಯಿಗಳು ಮಾಡಿದಂತಹ ಲೂಟಿ, ದರೋಡೆ, ಮೊದಲಾದ ಗಂಭೀರವಾದ ತಪ್ಪುಗಳಿಂದಾಗಿ ಜನರ ವಿಶ್ವಾಸ ಕಳೆದುಕೊಂಡರು.

ಪ್ರಶ್ನೆ 8. 1858 ರ ಬ್ರಿಟನ್ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು?

▪️ಕಂಪನಿಯು ದೇಶೀ ರಾಜರೊಂದಿಗೆ ಒಪ್ಪಂದಗಳನ್ನು ಅಂಗೀಕರಿಸಲಾಯಿತು.

▪️ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು

▪️ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು.

▪️ಕಾನೂನಿನ ಮುಂದೆ ಸಮಾನತೆ

▪️ಧಾರ್ಮಿಕ ಸಹಿಷ್ಣತೆಯೊಂದಿಗೆ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.

ಪ್ರಶ್ನೆ 9. 1858 ರ ದಂಗೆಯ ಪರೀಣಾಮಗಳಾವುವು ?

▪️ಈಸ್ಟ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಬ್ರಿಟನ್ ಸಾಮ್ರಾಜ್ಯಗೆ ಆಡಳಿತ ವರ್ಗಾವಣೆಗೊಂಡಿತು.

▪️ಭಾರತದ ವ್ಯವಹಾರವನ್ನು ಬ್ರಿಟಿಷ್ ಪಾರ್ಲಿಮೆಂಟಿನ ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಒಪ್ಪಿಸಲಾಯಿತು.

▪️ಭಾರತೀಯರಿಗೆ ಹಲವಾರು ಸೌಲಭ್ಯಗಳಿರುವ ರಾಣಿಯ ಘೋಷಣೆಯನ್ನು 1858ರಲ್ಲಿ ಹೊರಡಿಸಿದರು.

▪️ಭಾರತೀಯರ ಪ್ರೀತಿ, ಬೆಂಬಲ, ವಿಶ್ವಾಸವಿಲ್ಲದರೆ ನಾವು ಶಾಂತಿಯಿಂದ ಆಳ್ವಿಕೆ ಮಾಡಲು ಸಾಧ್ಯವಿಲ್ಲವೆಂಬುದನ್ನು ಬ್ರಿಟಿಷರು ಅರಿತರು.

▪️ಇದು ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕೂಚಿಯನ್ನು ನೀಡಿತು.

▪️ಭಾರತೀಯರು ಇನ್ನು ಮುಂದೆ ಹೋರಾಟದ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಕಂಡುಕೊಂಡರು.

History Notes
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top